ನೀರು

Advertisements
Share

ಬೆಂಗಳೂರಿಗರೇ,
ನಕ್ಷತ್ರಗಳ ಎಣಿಸಿದ್ದು ಸಾಕು
ಪಾತಾಳವ ಒಮ್ಮೆ ಇಣುಕ ಬನ್ನಿ

ಕೊಳವೆ ಬಾವಿಗಳು ಬಾಯಾರಿ ನಿಂತಿವೆ
ಖಾಲಿ ಕೊಡಗಳು ಜಪ ಹೇಳುತ್ತಿವೆ
ಉಸ್ಸ್ ಎನ್ನುವ ನಲ್ಲಿಯ ಕೆಳಗೆ

ಕಾಂಕ್ರೀಟ್ ಚಾಪೆಯ ಕೆಳಗೆ
ಮುಚ್ಚಿ ಹೋದ ಸೆಲೆಗಳೆಷ್ಟು
ಮಾಯವಾದ ಕೆರೆಗಳೆಷ್ಟು

ಮದ್ಯದಂಗಡಿಯ ಮುಂದೆ
ನಗರವೇ ಸಾಲುಗಟ್ಟಿದೆ
ಅಭಿವೃದ್ಧಿ ಎಂಬುದೇ ಅಮಲು

ಡೇವಿಡ್ ಕುಮಾರ್ . ಎ

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram