
ಬೈಬಲ್ನಲ್ಲಿ ಎರಡು ಬಗೆಯ ಪ್ರವಾದಿಗಳಿರುವಂತೆ ಇಬ್ಬಗೆಯ ಸಾಹಿತ್ಯ ಪ್ರಕಾರಗಳನ್ನೂ ಸಹ ಜಗತ್ತಿನಲಿ ಕಾಣಬಹುದಾಗಿದೆ: ಒಂದು ಸಮರ್ಥನಿಯ ಸಾಹಿತ್ಯ ಇನ್ನೊಂದು ಬಂಡಾಯ ಸಾಹಿತ್ಯ. ಆಳುವವರ ತಪ್ಪು ಒಪ್ಪುಗಳ ಸಮರ್ಥಿಸಿ ಜನರ ಮನಒಪ್ಪಿಸಲು ರೂಪುಗೊಂಡ ಸಾಹಿತ್ಯವೇ ಸಮರ್ಥನಿಯ ಪ್ರಕಾರ. ಇನ್ನೊಂದು ಕಡೆ ಆಳುವವರ ಕ್ರೌರ್ಯ, ಭ್ರಷ್ಟತೆ ವಿರೋಧಿಸಿ ಬರೆದ ಸಾಹಿತ್ಯವನ್ನು ಬಂಡಾಯ ಸಾಹಿತ್ಯವೆನ್ನಬಹುದು. ಬೈಬಲ್ ಒಂದು ಕ್ರಾಂತಿಯುತ ಸಾಹಿತ್ಯದ ಪ್ರಕಾರ. ಸ್ಥಾವರ ಅಥವಾ ಸಾಂಸ್ಥಿಕ ಆಸ್ಥಾನವು ಬಂಡಾಯ ಸಾಹಿತ್ಯವನ್ನು ಅಪಾಯಕಾರಿಯೆಂದು ತೀರ್ಮಾನಿಸಿ ಇಂತಹ ಕ್ರಾಂತಿಯುತ ಸಾಹಿತ್ಯ ಜನಕರಾದ ಬುದ್ಧಿಜೀವಿಗಳನ್ನು ಬೇಟೆಯಾಡಿ ಅವರನ್ನು ನಿರ್ಮೂಲನೆ ಮಾಡಿ, ಮುಖಸ್ತುತಿ ಮಾಡುವ ಅಥವಾ ಹೊಗಳು ಭಟ್ಟರನ್ನು ನೇಮಿಸುತ್ತಾರೆ. ಇದ್ದರಿಂದ ಸಾರ್ವಜನಿಕರ ಬೊಕ್ಕಸಕ್ಕೂ ನಷ್ಟ ಉಂಟುಮಾಡುತ್ತಾರೆ.
ಇನ್ನಾ